Monday, March 19, 2018

ಪ್ರಕೃತಿಯ ಪಾಠ

ಪ್ರಕೃತಿಯ ಪಾಠ ೧ : ಅವಧೂತನು ಬೆಂಕಿಯಿಂದ ಕಲಿತ ಪಾಠ :
ಬೆಂಕಿಯನ್ನು ನೋಡಿ ನಾವು ಅದರಂತೆ ತೇಜಸ್ವಿಗಳಾಗಬೇಕು, ಅಂದರೆ ಅದು ಬೇರೆಯವರಿಗೆ ಕೊಡುವ ಬೆಳಕಿನ ಹಾಗೆ ಬೇರೆಯವರ ಬಾಳಿಗೆ ಬೆಳಕು ಕೊಡುವಂತವರಾಗಬೇಕು. ಬೆಂಕಿ ಕತ್ತಲನ್ನ  ಓಡಿಸತ್ತೆ, ಹಾಗೆ ನಾವು ನಮ್ಮಲ್ಲಿರುವ ಅಜ್ನ್ಯಾನವನ್ನು ಓಡಿಸಬೇಕು.
ಬೆಂಕಿ ಹೇಗೆ ಸೌದೆಯನ್ನು ಇಟ್ಟಷ್ಟು ಸುಟ್ಟು ಇನ್ನು ಪ್ರಜ್ವಲಿಸತ್ತೊ ಹಾಗೆ ನಾವು ತಪಸ್ಸಿನಿಂದ ( ಸದ್ವಿಚಾರಗಳ ಮನನ ಶಕ್ತಿಯಿಂದ) ಕೆಟ್ಟ ವಿಚಾರಗಳ್ಳನ್ನ ಸುಟ್ಟು ಕಂಗೊಳಿಸುವಂತವರಾಗಬೇಕು.
ಬೆಂಕಿ ತುಪ್ಪ ಹಾಕಿದರು ಸುಡುತ್ತೆ ಮಲ ಹಾಕಿದರು ಸುಟ್ಟು ಜಿರ್ಣಿಸಿಕೊಳ್ಳತ್ತೆ ಹಾಗೆ ಬಾಳಿನಲ್ಲಿನ ಯೆಶಸ್ಸು, ಅಪಮಾನ, ನಿಂದೆ ಇವನ್ನೆಲ್ಲ ಒಂದೇ ಸಮನಾಗಿ ಜೀರ್ಣಿಸಿಕೊಂಡು ಪ್ರಜ್ವಲಿಸಬೇಕು.
ಕೊನೆಯದಾಗಿ ನಾವು ಬೆಂಕಿಯಸ್ಟೆ ನಿಷ್ಟೂರರಾಗಿರಬೇಕು, ಅಂದರೆ ಯಾರಾದರೂ ಮುಟ್ಟಿದರೆ ಸುಡುವಂತಿರಬೇಕು (ಜ್ನ್ಯಾದದಲ್ಲಿ ಶ್ರೇಷ್ಠತೆ ಹೊಂದಿ ಅದರ ಪ್ರಖರತೆಗೆ ನಮ್ಮ ಬಗ್ಗೆ ಅನ್ಯತ ಮಾತನಾಡುವವರು ಹೆದರಬೇಕು). ದೂರದಲ್ಲೇ ನಿಂತು ನಮ್ಮ ಜ್ನ್ಯಾನದ ಬೆಳಕಿನ ಉಪಯೋಗ ಪಡಿಬೇಕೇ ಹೊರತು ಹಾಳು ಮಾಡಲು ಬಂದು ಮುಟ್ಟಿದರೆ ಅವರಿಗೆ ಅದರ ಉರಿವಿನ ಅರಿವಾಗುವಂತಿರಬೇಕು.
 - ಶರ

No comments: