Saturday, August 9, 2008

ಪ್ರೀತಿಯ ಪನ್ನೀರು


ಮಿಂಚಿನ ವೇಗದ ನೀಲಿ ಕಣ್ಣಂಚಿನಿಂದ ಸೆಳೆದಳು ಅವಳೆನ್ನ….
ಒಂದೊಮ್ಮೆಯಾದರು ಆ ಕಣ್ಣಿನ ಕನಸಲಿ ತೇಲಬಾರದೆ ಎನ್ನ ಮನ…..
ಹೀಗೆ ಬಾವನೆಗಳ ಬ್ರಮೆಯಲ್ಲಿ ತೇಲುತಿರಲು ಬಂದಳವಳು ಎನ್ನ ಬಳಿ.....
ತುಸು ಮಾತಿನ ಪಿಸು ದನಿಯಲಿ.....ಹೇಳಿದಲೊಂದು ನುಡಿಯ.....
ಓ ಗೆಳೆಯ....ಇ ಕಂಗಲೇನೋ ನನ್ನದು.....ಆದರೆ.....
ಇದರಲ್ಲಿ ಸೆರೆಹಿಡಿದ ಬಿಂಬ ಮಾತ್ರ ನಿನ್ನದು ...
ಬಾ ಸೇರಿಸುವ ನೋಟವ ....ನೋಡು ಆಗ ಇ ಪ್ರೆಮಲೋಕವೆಲ್ಲ ನಮ್ಮದು ...
- ಶರ

ಒಲವಿನಾ ಬಲೆಯಲಿ ಸಿಕ್ಕಿ ಬಿದ್ದ ಜೇಡವಾದೆನು
ಪ್ರೀತಿಯೆಂಬ ಮಾಯಾಮ್ರುಗವ ಹಿಡಿಯ ಹೊರಟ ಬೇಡನಾದೆನು
ಸಾಯುವೆನೊ, ಹಿಡಿಯುವೆನೊ ಒಂದೂ ತಿಳಿಯದಾದೆನು
- ಶರ

ಕಳ್ಳ ಮನವು ಏಕೊ ಇಂದು ಬೆಳ್ಳಿ ಮೊಡವಾಗಿದೆ.....
ರೆಪ್ಪೆ ಬಡಿಯುವಸ್ಟರಲ್ಲಿ ಕಡಲ ದಾಟಿ ಸಾಗಿದೆ.....
ಪ್ರೀತಿಯೆಂಬ ಗಾಳಿ ಅದನು ಅವಳ ಊರಿಗೊಯ್ದಿದೆ.....
ಪ್ರೇಮದಿನದ ಬಿಸಿಯು ತಾಕಿ ಮನದ ಮೊಡ ಕರಗಿ ನನ್ನವಳ ಹಾಗೆ ನೆನೆಸಿದೆ !

ಎಷ್ಟು ದೂರವಿದ್ದರೇನು ಗೆಳತಿ, ಕಲ್ಪನೆಯಲೆ ನಿನ್ನ ಮುಟ್ಟುವೆ.....
ಭೂಮಿ, ಬಾನು, ಮೊಡ ಮಳೆಯು ಇರುವಷ್ಟು ಕಾಲ ನೆನೆಯುವೆ.....ನಿನ್ನನ್ನೇ ಸದಾ ಪ್ರೀತಿಸುವೆ.
- ಶರ

ದನಿಯಾದಳು...ದಿನವಾದಳು.....
ದಾರಿ ಮರೆತ ದೀನಮನಕೆ ದೀಪದ ಬೆಳಕಾದಳು.....
ದಿನವ ದೊಚಿ...ಮನವ ಮಣಿಸಿ...ದಿಗಂತವೇರಿ ಹೋದಳು.....
ದ್ರುವತಾರೆಯ ಗುಂಪು ಸೇರಿ ಮಿನುಗುತಾರೆಯದಳು.....
ದನಿಯಾದಳು.....ದಿನವಾದಳು.....ಬದುಕಿಸಿ ನನ್ನ.....ಬರಿಯ ನೆನಪಾದಳು.....
- ಶರ

ಮೊದ ಮೊದಲು ಮೊಟ್ಟಮೊದಲು
ನನ್ನೊಳಗೆ ನಾನಗಿದ್ದೆ ನಾನು
ನಿನ್ನೊಳಗೆ ನೀನಾಗಿದ್ದೆ ನೀನು

ನಿನ್ನ ನೋಡಿದ ಮೊದಲ ನೋಟದಿ
ನನ್ನ ದೃಷ್ಟಿ ನಿನ್ನದಾಯ್ತು
ನನಗೆ ತಿಳಿಯದೇನೆ
ನನ್ನಮನಸು ತೇಲಿ ಹಾರೊಯ್ತು
ಅದು ನಿನ್ನ ಮನಸ ಸೇರಿತ್ತು .

ನಡು ನಡುವೆ ನಟ್ಟನಡುವೆ
ನನ್ನನೆ ನಾ ಮರೆತೆ
ನಿನ್ನ ಹ್ರುದಯದ ಕದವ ಬಡಿದೆ.

ನನ್ನ ಮನಸಿನ ಅಂದಚೆಂದಕೆ
ನಿನ್ನ ಮನಸು ಬೆರಗಾಯ್ತು
ಮಿನುಮಿನುಗೋ ಕೆಂಪು ತುಟಿಯಲಿ
ಪ್ರೀತಿ ಮಾತು ಬಂದಾಯ್ತು
ಅತ್ತ ಇತ್ತ ನೋಡದೆ ಮನಸುಗಳು ಬದಲಾಯ್ತು

ಕೊನೆ ಕೊನೆಗೆ ಕಟ್ಟಕಡೆಗೆ
ನಾನು, ನೀನು ನಾವಾದೆವು
ಬೆಳ್ಳಿ ಮೋಡದಲ್ಲಿ ಹಾರಿ ತೇಲಿ ಹಾಡಾದೆವು .
- ಶರ

ಬಾವನೆಯ ಬೆನ್ನೇರಿ

ಬಾವನೆಗಳ ಬೆಸೆಯುವುದಕೆ ಭಾಷೆ ಒಂದು ಸಾಧನ...
ಭಾಷೆಯ ಹಿರಿಮೆ ಅರಿತು ಬಾಳೆ, ಅದುವೇ ಸಾರ್ಥಕತೆಯ ಜೀವನ...

ಜೀವನ ಸಾರ ತಿಳಿದು ಹೇಳೊ ಕನ್ನಡದೊತ್ತಿಗೆಗಳ ಓಧುವ...
ಅದರ ತಿರುಳ ಅರಿತು ನಡೆದು ಬಾಳಿಗೊಂದು ಅರ್ಥ ನೀಡುವ...

ಜಾನಪದದ ಜಾಡಿನಲ್ಲಿ ಸಂಸ್ಕೃತಿಯ ತಿಳಿದು ನಡೆಯುವ...
ಹುಟ್ಟಿ ಬಂದ ಹಳ್ಳಿಗಳಿಗೆ ಸೇವೆಯ ಹಸ್ತ ಸದಾ ಚಾಚುವ...

ಇರುವ ತನಕ ನಾಡು ನುಡಿ ಸೇವೆಗಾಗಿ ಬಾಳುವ...
ಸತ್ತ ಮೇಲೂ ಸ್ವರ್ಗದಲ್ಲಿ ನಾಡಹಬ್ಬ ಮಾಡಿ ಮೆರೆಯುವ...

- ಶರ

ಓ ಸಾವೇ, ಬಾರದಿರು ನೀ ಪ್ರೀತಿಸಿ ಪೊರೆವ ಸಂಬಂದಗಳಲಿ,
ಬಾರದಿರು ನೀ ಜಗವ ಕಾಣದ ಹಸು ಕಂದಮ್ಮಗಳಲಿ,
ಕಾನದಿರು ನೀ ಪ್ರೀತಿಯ ಅರ್ಥ ತಿಳಿಸಿದ ಪ್ರೇಯಸಿಯಲಿ,
ಬಾರದಿರು ನೀ ದೇವರೆಂದು ತಿಳಿದ ತಂದೆ ತಾಯಿಯರಲ್ಲಿ,
ನೀ ಹುಟ್ಟಿ ಬಾ ಒಮ್ಮೆ ಇ ಪ್ರೀತಿ ತುಂಬಿದ ಜಗದಲ್ಲಿ,
ಆಗ ನಿನಗೂ ಅನಿಸುತ್ತದೆ.....ನನಗೂ ಸಾವು ಬಾರದಿರಲಿ.....ನನಗೂ ಸಾವು ಬಾರದಿರಲಿ.
- ಶರ

ಸದಾ ನಗುತಿರೆ , ಜನರೆನ್ನುವರು ನೀ ಹುಚ್ಚನೆಂದು...
ಒಮ್ಮೊಮ್ಮೆ ಅತ್ತರೂ ಹೇಳುವರು ಅಳುಬುರಕನೆಂದು...
ಅಳದೆಯೂ, ನಗದೆಯೂ ಇದ್ಧರೆ ಅನ್ನುವರು ನೀ ಗುಮ್ಮನೆಂದು... 
ಆವರು ನಕ್ಕಾಗ ನಕ್ಕು, ಅಳುವಾಗ ಅತ್ತು ಆವರಂತೆ ನಡೆದರೆ... 
ಒಪ್ಪುವರು ನೀ ಸರ್ವರೊಳಗುತ್ತಮನೆಂದು...
- ಶರ
ಸೋಲು , ಸೋಲು, ಸೋಲು
ಜೀವನದಲ್ಲಿ ಸೋಲು ಸಹಜ
ಸೋಲನ್ನರಿತು ಅದಮೆಟ್ಟಿ
ಗೆದ್ಧವನೆ ಚಲವಿರುವ ಮನುಜ

ಸೋತಾಗ ನಿನ್ನ ನೋಡಿ ನಗುವವರು ನಾಲ್ವರು
ಹಾಸ್ಯಮಾಡಿ ಹಿಂದೆ ನೂಕುವವರು ಮೂವರು
ನೀ ಯಾತಕು ಬಾರದವನೆನ್ನುವರು ಇರ್ವರು
ಆಧರೆ , ಎಲ್ಲ ಇರುವುದು ನಿನ್ನಲ್ಲೇ ಎನ್ನುವವನೋಬ್ಬನೆ , ಆ ದೇವರು

ಸೋಲಿನ ಕಾರಣ ಹೆಕ್ಕಿ ಹೇಳುವವರೇ ನಿಜವಾದ ಸ್ನೇಹಿತರು
ಅದನು ಮರೆಸಿ ಗೆಲುವ ದಾರಿ ತೊರುವರೆ ನಿನ್ನ ಬಾಂಧವರು
ಅದೆಲ್ಲಕ್ಕಿಂತ ಕರ್ಣಕುಂದಲದಂತೆ ನಿನ್ನಿಂದೆ ಇರುವರು ನಿನ್ನ ತಂದೆತಾಯಿಯರು
ಚಲಬಲದಿ ಗೆದ್ಧಾಗ , ನಕ್ಕವರು ನಿನ್ನ ಹಿಂದೆ ಹೌಹಾರಿ ಬರುವರು

ಸೋಲು , ಸೋಲು, ಸೋಲು
ಜೀವನದಲ್ಲಿ ಸೋಲು ಸಹಜ
ಸೋಲನ್ನರಿತು ಅದಮೆಟ್ಟಿ
ಗೆದ್ಧವನೆ ಚಲವಿರುವ ಮನುಜ
- ಶರ

ಚಿಂತನೆಯ ಚಾವಡಿ

ಕನ್ನಡಿಗರಾದ್ರೆ ಒಂದ್ಸಲ ಓದಿ
How r u mate?.....Wats up buddy?.....How is life?....How u doing?...ಇವೆಲ್ಲಾ ಪರಸ್ಪರ ಕ್ಷೇಮಸಮಾಚಾರಗಳನ್ನ ಕೇಳಿಕೊಳ್ಳುವ ಬಗೆಗಳು. ಅದರಲ್ಲೂ MNC ಗಳಲ್ಲಿ ಕೆಲಸ ಮಾಡುವ ಕನ್ನಡಿಗರ ನಡುವೆ ನಡೆಯುವ ಸಂಭಾಷಣೆಯ ರೀತಿ.
ಗೆಳೆಯರೇ....,
ಏನಪ್ಪಾ ಹೇಗಿದ್ಧಿಯ?.....ಏನ್ ಸಮಾಚಾರ?.....ಹೇಗಿದೆ ಜೀವನ?......ಏನು ವಿಶೇಷ?.....ಅಂತೆಲ್ಲ ಕೇಳುವುದಕ್ಕಿಂತ ಆತ್ಮೀಯತೆ ಇ ಇಂಗ್ಲಿಷ್ ಪದಗಳಲ್ಲಿ ಸಿಗುತ್ತ?.....ಅಥವಾ ಕನ್ನಡದಲ್ಲಿ ಕೆಳೋಕ್ಕೆ ನಮ್ಮಲ್ಲಿನ ಕನ್ನಡಿಗ ಇನ್ನು ಜಾಗ್ರುಥನಾಗದೆ ಮಲಗಿದ್ದಾನೆಯೇ ???ನಾವುಗಳು ಒಂದು ದಿನದಲ್ಲಿ ಹಲವಾರು ಕೆಲಸಕ್ಕೆ ಬಾರದ jokes, forword message ಗಳನ್ನ ಓದುತ್ತೇವೆ, ಇದೇ ರೀತಿ ಎಸ್ಟೋ ಸಮಯ ಹಾಳು ಮಾಡುತ್ತೇವೆ; ಆಧರೆ, ನಮ್ಮಲ್ಲಿ ಇದೂವರೆಗೂ ಒಮ್ಮೆಯಾದರೂ Wikipedia ತೆಗೆದು ಕರ್ನಾಟಕದ ಬಗ್ಗೆ ಓದಿದ್ದೀರಾ? ಬವಿಷಹ ಇದ್ದರೂ, ಅದು ಬೆರಳೆನಿಕೆಯಸ್ತು ಮಾತ್ರ. ಕನ್ನಡಿಗರಾದ ನಮಗೇ ಕನ್ನಡದ ಬಗ್ಗೆ ಪರಿಚಯ ಇಲ್ಲ, ಕನ್ನಡದ ಅಭಿಮಾನ ಎಚ್ಚೆತ್ತುಕೊಂಡಿಲ್ಲ, ಅಂದಮೇಲೆ ಇಂದಿನ ಬೆಂಗಳೂರಿನ ಕನ್ನಡಿಗರ ಸ್ಥಿತಿಗೆ ನಾವು ಕಾರಣೀಬೂತರಾಗುತ್ತೇವೆ. ಎನ್ನಡ...ಎಕ್ಕಡಿಗರುಗಳ ಆರ್ಭಟ ಕಿವಿಗೆ ಬಿದ್ದಾಗ ಮಾತ್ರ ನಮ್ಮಲ್ಲಿನ ಕನ್ನಡಿಗ ಎಚ್ಚೆತ್ತುಕೊಳ್ಳುತ್ತಾನೆ, ಕೋಪಗೋಳ್ಳುತ್ತಾನೆ. ಇದು ಎಷ್ಟು ಸಮಂಜಸ ಅಂತ ನಾವೇ ವಿಮರ್ಶಿಸಿಕೊಳ್ಳಬೇಕು.
ಆದ್ದರಿಂದ ಕನ್ನಡಿಗರಲ್ಲಿ ಪೈಪೋಟಿ ಬಿಡಿ, ಕನ್ನಡಿಗರ ನಡುವೆ ನಮ್ಮ English vacabulory, ಗಣಥೆಯ ಪ್ರದರ್ಶನಗಳನ್ನ ಬದಿಗೊತ್ತಿ, ಪರಸ್ಪರ ಕನ್ನಡದಲ್ಲಿ ಮಾತಾಡಿ. ಹೆಮ್ಮೆಯಿಂದ ನಮ್ಮ ಭಾಷೆಯನ್ನು ಬಳಸಿ, ಕನ್ನಡದಲ್ಲಿ ಯೋಗಕ್ಷೇಮ ವಿಚಾರಿಸಿ, ಸಾದ್ಯವಾದರೆ ಕನ್ನಡ ಸಾಹಿತ್ಯದ ಬಗ್ಗೆ message forword ಮಾಡಿ. ಎ ಕಂಪ್ಯೂಟರ್ ಮುಂದೆ ಕುಳಿತು ನಮ್ಮಿಂದ ಎಷ್ಟು ಕನ್ನಡ ಸೇವೆ ಸಾದ್ಯವೊ, ಅಷ್ಟನ್ನು ಮಾಡುತ್ತೇವೆ ಎಂದು ಕಂಕಣ ತೊಡಿ.
ನನ್ನೊಬ್ಬನಿಂದ ಏನು ಆಗಲ್ಲ ಅಂತ ತಿಳಿಯಬೇಡಿ, ಬದಲಿಗೆ " ನನ್ನೊಬ್ಬನಿಂದಲೇ ಎಲ್ಲಾ ಬದಲಾವಣೆ ಸಾಧ್ಯ " ಎಂದು ಒಂದು ಹೆಜ್ಜೆ ಇಡಿ. ಆಗ ನೋಡಿ ಬದಲಾವಣೆಯ ಗಾಳಿ ಕಳೆದುಹೊದ ಕನ್ನಡಿಗನ ದಿಕ್ಕನ್ನು ಬದಲಿಸಿ ಮತ್ತೆ ತನ್ನ ತಂಪನ್ನು ಹೇಗೆ ಸೂಸುತ್ತದೆ ಎಂದು.
ವರುಷದಲ್ಲಿ ಒಂದು ದಿನ ಮಾತ್ರವಲ್ಲದೆ ( ನವಂಬರ್ ೧ ), ನಮ್ಮಲ್ಲಿ ಇದುವರೆಗೂ ಎದ್ದೇಳದೆ ಮಲಗಿರುವ ಕನ್ನಡಿಗನನ್ನು ಎಬ್ಬಿಸಿ, ಕೊನೆ ಉಸಿರಿರುವವರೆಗೂ ನಿದ್ರಿಸದೆ, ಅಳಿಯುತ್ತಿರುವ ಕನ್ನಡದ ಕೃಷಿ ಮಾಡೋಣ. ಆ ಕೃಷಿಯ ಪಳವನ್ನು ನಾವೆಲ್ಲರೂ ಹಂಚಿ ತಿನ್ನೋಣ, ಹಸಿವು ಎಂದು ಬಂದವರಿಗೂ ಕನ್ನಡದ ಸುಧೆಯನ್ನು ಹಂಚೊಣ, ಹೀಗೆ ಕನ್ನಡ ಭುವನೇಶ್ವರಿಯ ಕಿಂಚಿತ್ತು ಸೇವೆಗೆ ಕೈ ಜೋಡಿಸಿ ನಡೆಯೊಣ.

" ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "
- ಶರ

ಹೊಸ ವರುಷದ ಹೊಸ ಚಿಂಥನೆ

ಆಗ ತಾನೆ ನ್ಯೂಸ್ ನಲ್ಲಿ ಮುಕೆಶ್ ಅಂಬಾನಿ ವೆಲ್ತ್ ರೂ. 250000 ಕೋಟಿ ಅಂತ ಹೇಳಿದ್ರು ಅದನ್ನೇ ಯೋಚಿಸ್ತಾ ಹಾಗೆ ಹಾಸಿಗೆ ಮೇಲೆ ಹೊರಳಿದೆ, ಒಳ್ಳೆ ನಿದ್ದೆ ಬಂತು, ಹಾಗೆ ಕನಸಲ್ಲಿ ಅಂಬಾನಿ ಬಂದು ಅವರ ವೆಲ್ತ್ ನ ಶೇ ೧ ಭಾಗವನ್ನ ಅಂದರೆ ರೂ ೨೫೦೦ ಕೋಟಿ ಕೊಟ್ಟು ಹೋದರು, ಆಹಾ ಎಂತ ಕನಸು ನಿಜವಾಗ್ಲು ಅವ್ರ ಫೋಟೋನ ದಿನಾ ಪೂಜೆ ಮಾಡ್ಬೇಕು ಯಾಕಂದ್ರೆ ಇದರಿಂದ ನನ್ನ ಎಲ್ಲಾ ಆಸೆಗಳು ಒಂದೇ ಕ್ಷಣದಲ್ಲಿ ಈಡೇರಿದ್ಧವು, ಅದಕ್ಕೆ!. ಹಾಗೆ ನಿದ್ದೆ ಮುಗಿತು ನಂತರ ನೋಡ್ತಿನಿ ಏನು ಇಲ್ಲ ಕೈಯಲ್ಲಿ, ಮನಸಲ್ಲೇ ಬೈಕೊಂಡೆ ಅಂಬಾನಿಯವರನ್ನ, ಅಸ್ಟೆಲ್ಲ ಇದ್ರು ಶೇ ೧ ಭಾಗ ನಂಗೆ ಕೊಡಕ್ಕೆ ಏನು ಅಂತ, ಅದರಿಂದ ನಂಗೆ ಅವ್ರು ಎಸ್ಟು ಕುಶಿ ಕೊಡಬಹುದಿತ್ತು ಅಂತ.
ಆದ್ರೆ ಒಂದು ಕ್ಷಣ ಹಾಗೆ ಯೋಚನೆಯ ಆಳಕ್ಕೆ ಇಳಿದು ನೋಡಿದರೆ, ನನಗೆ ಗೊತ್ತಿಲ್ಲದ ನಾನೇ ಆ ಸಂತೋಷವನ್ನ ಬೇರೆಯವಿರಿಗೆ ಕೊಡುವಸ್ಟು ಬೆಳೆದಿದ್ದೇನೆ ಅಂತ ಅನ್ನುಸ್ತು!
ಅಹುದು ಗೆಳೆಯರೇ..,
ನಾವೆಲ್ಲರೂ ಇವಾಗ ಆ ಸ್ಥಾನದಲ್ಲಿ ಇದ್ಧೇವೆ, ನಾನು ವರ್ಷಕ್ಕೆ ಅಂದಾಜು ೫ ಲಕ್ಷ ದುಡಿದರೆ ಅದರ ಶೇ ೧ ಭಾಗ ಅಂದ್ರೆ ೫ ಸಾವಿರ ಆಯ್ತು, ಆದರೆ ಇಸ್ಟು ದುಡ್ಡು ನಮಗೆ ಏನೋ ಅಲ್ಲ, ವರುಷಗಳಲ್ಲಿ ಬಂದು ಹೋಗೋ ಹಲವಾರು ಪಾರ್ಟಿಗಳಲ್ಲಿ ಒಂದು ಪಾರ್ಟಿಗೆ ಕರ್ಚು ಮಾಡೋ ಹಣ. ಅದರೆ, ಈ ಹಣ ಒಬ್ಬ ಸಾಮಾನ್ಯ ರೈತನ ಒಂದು ವರ್ಷದ ದುಡಿಮೆ, ಇಂದಿಗೂ ಕೂಡ ಅವರ ದುಡಿಮೆ ಇಸ್ಟೆ, ವರ್ಷಕ್ಕೆ ನಮಗೆ ಹಲವು ಬಾರಿ ಹೈಕ್/ಬೋನಸ್ ಸಿಗುತ್ತವೆ, ಆದರೆ ವರ್ಷಕ್ಕೊಮ್ಮೆ ಬಂದು ಹೋಗೋ ಮಳೆ ಏನಾದರು ಕೈ ಕೊಟ್ಟರೆ ಇದರಿಂದ ಇವರ ಪಾಡು ಕಣ್ಣಿರಲ್ಲಿ ಕೈ ತೋಲ್ಯೋದೆ, ಇವೆಲ್ಲರ ನಡುವೇ ಅವರು ಅವರ ಮಕ್ಕಳನ್ನ ಓದ್ಹಿಸೊದು ಹೇಗೆ? ಎಸ್ಟು ಕಸ್ಟ ಇದೆ , ಇಧರಿಂದ ವಿಧ್ಯಾವಂತ ಬಾಲಕರು ಫೀಸ್ ಕಟ್ಟಲಾಗದೆ ತಮ್ಮ ಭವಿಷ್ಯವನ್ನ ಕೂಲಿಗೆ ಮೀಸಲಿಡ್ತಾರೆ, ಯಾಕೆ ನಮಗೆ ಇದೆಲ್ಲ ಗೊತ್ತಾಗ್ತಿಲ್ಲ? ಯಾಕೆ ನಾವು ನಮ್ಮ ಸುಕದ ಗುಂಗಿನಲ್ಲೇ ಮುಳುಗಿ ಹೋಗಿದ್ದೆವೆ? ತಿಂಗಳಿಗೊಂದು ಮೊಬೈಲ್, ಹೊಸ ಹೊಸ ಮಾಡೆಲ್ ನ ಗಾಡಿಗಳು ಇದೇನ ಜೀವನದ ಗುರಿ? ನಾವೆಲ್ಲ ಇ ದಿನ ಪಲ ಕೊಡುವ ಮರಗಳಾಗಿ ಬೆಳೆದಿದ್ದರೆ, ಎಲ್ಲೋ ಒಂದು ಕಡೆ ನಮ್ಮ ಬೇರು ಹುಟ್ಟಿದ್ದು ಈ ಬಡ ಹಳ್ಳಿಗಳಲ್ಲ್ಲಿಯೇ ಅಂತ ಮರೀಬಾರದು, ಬೇರಿಗೆ ನೀರೆರೆದವರನ್ನ ಮರೆತು ಹಣ್ಣನ್ನು ಸ್ವಾರ್ಥಕ್ಕೆ ಮಾರಿಕೊಲ್ಲಭಾರದು ಅಂಥ ನನ್ನ ನಿಲುವು.
ಇಸ್ಟೆಲ್ಲ ಪೀಠಿಕೆ ಹಾಕಿ ನಾನು ಹೇಳಬಯಸುವ ಮಾತು ಇಸ್ಟೇ........ನಮ್ಮ ಒಂದು ವರುಷದ ಆದಾಯದ ಶೇ ೧ ಬಾಗವನ್ನ ನಾವು ತೆಗೆದಿಟ್ಟು, ಆ ಹಣದಿಂದ ನಮ್ಮ ಹಳ್ಳಿಗಳಿಗೆ ಹೋಗಿ ಚೆನ್ನಾಗಿ ಓದುವ ವಿಧ್ಯಾರ್ಥಿಗಳಿಗೆ ಬಹುಮಾನವಾಗಿ ಕೊಟ್ರೆ, ನಿಜವಾಗ್ಲೂ ಹಣದ ಅವಶ್ಯಕತೆ ಇರುವವರಿಗೆ ನೀಡಿದರೆ ಅಥವಾ ಚಿಕ್ಕ ಮಕ್ಕಳಿಗೆ ಇದರಿಂದ ಪುಸ್ತಕ ಪೆನ್ನಿನ ವ್ಯವಸ್ಥೆ ಮಾದಿದರೆ,ಇದರಿಂದ ಅವರ ಜೀವನದ ಒಂದು ಮುಖ್ಯ ತಿರುವಿಗೆ ನಮ್ಮ ಕೈ ಜೋಡಿಸಿ ಒಳ್ಳೆ ಹಾದಿಯನ್ನು ತೋರಿಸಿದ ಹಾಗೆ ಆಗುತ್ತೆ, ಹಾಗು ನಮ್ಮ ಪೂರ್ವಜರು ಬಾಳಿ ಬದುಕಿದ ಊರಿಗೆ ನಮ್ಮ ಕಿಂಚಿತ್ತು ಸೇವೆಯೋ ಆದ ನೆಮ್ಮದಿ ಸಿಗುತ್ತದೆ.
ಆದರೆ ಈ ಯೋಚನೆ ತುಂಬ ಸುಲಬ ಆದರೆ ಕಾರ್ಯಗತಗೊಳಿಸಲು ಸಹೃದಯ ಬೇಕು ಯಾಕಂದ್ರೆ ದುಡ್ಡು ಯಾರಿಗೆ ಬೇಡ ಹೇಳಿ? ಸುಮ್ಮನೆ ೫ ಸಾವಿರ ರೂ ನ ಯಾರಿಗೋ ಕೊಡಬೇಕು ಅಂದ್ರೆ ಮನಸ್ಸು ಹೇಳತ್ತೆ, ನಿನ್ನ ಕಷ್ಟ ನೀನು ತೀರುಸ್ಕೋ ಮೊದಲು ಅಂತ, ಆದರೆ ನಿಜವಾದ ಕಷ್ಟ ನಮ್ಮಗಳದ್ಯಾರದ್ದೂ ಅಲ್ಲ ಅನ್ಸುತ್ತೆ, ನಿಜವಾದ ಕಷ್ಟ ೩ ಹೊತ್ತು ಊಟಕ್ಕೆ ಇಲ್ಲದವರದ್ದು , ವರುಷಕ್ಕೊಂದು ಬಟ್ಟೆ ತಗೊಳಕ್ಕೆ ಆಗಲ್ಲ ಅವರದ್ದು, ಮಳೆ ಬಂದರೆ ಸೂರಿಗೆ ಹಂಚಿಲ್ಲದೆ ರಾತ್ರಿಯೆಲ್ಲ ನಿದ್ದೆ ಇಲ್ಲದೆ ಕುಳಿತಿರುವವರದ್ದು, ಸಣ್ಣ ಫೀಸ್ ಕಟ್ಟಲಾಗದೆ ತಮ್ಮ ಭವಿಷ್ಯವನ್ನ ಕತ್ತಲೆಗೆ ತಲ್ಲುವವರದ್ದು, ಆದರೆ ನಮಗೆ ಇದಾವುದರ ಚಿಂತೆಯೂ ಇಲ್ಲ ಆದರೂ ಕಷ್ಟಗಳನ್ನ ಹುಟ್ಟಿ ಹಾಕಿಕೊಳ್ಳುತ್ತೇವೆ, ನಾವೇ ಅತಿ ಕಷ್ಟದಲ್ಲಿ ಇರುವವರ ಹಾಗೆ ಕಂಡ ಕಂಡವರಿಗೆಲ್ಲ ಹೇಳಿ ಕೊಳ್ಳುತ್ತೇವೆ, ನಿಜವಾಗಿ ಯೋಚಿಸಿ, ಮೇಲೆ ಹೇಳಿದ ಕಷ್ಟದಲ್ಲಿ ಒಂದಾದರೂ ನಮಗಿವೆಯೇ ?
ಗೆಳೆಯರೇ ನಾವೇಸ್ಟು ಸುಖಿಗಳು ಅಂತ ನಾವಿನ್ನು ನಮ್ಮನ್ನೇ ಅರಿತಿಲ್ಲ ಅದ್ದರಿಂದ ಒಂದು ಸಣ್ಣ ಸಂಕಲ್ಪ ಮಾಡೋಣ ಹೊಸ ವರುಷದ ಹೊಸ ಹಾದಿಯಲ್ಲಿ ನಮ್ಮ ಹಳ್ಳಿಯ ಹಾದಿಗಳನ್ನ ಹೊಕ್ಕು ನೋಡೋಣ, ನಮ್ಮ ಆಸರೆಯ ಕೈ ಯನ್ನು ಸಹಾಯ ಬೇಡುವವರಿಗೆ ನೀಡಿ ಮೇಲೆತ್ತೋಣ, ಇದಕ್ಕೆ ನಮ್ಮ ದುಡಿಮೆಯ ಕೆಲವ ಶೇ ೧ ಬಾಗ ಮಾತ್ರ ಸಾಕು, ಇನ್ನು ಉಳಿದ ಶೇ ೯೯ ಬಾಗದ ಬಗ್ಗೆ ನಾನು ಏನನ್ನು ಕೆಳುವುದಿಲ್ಲ, ಆದರೆ ಈ ೧ ಬಾಗದಿಂದ ನಮ್ಮ ನಿಸ್ವಾರ್ಥ ಸೇವೆಯ ಹಣತೆ ಹಚ್ಚೋಣ, ನಿಜವಾದ ಆತ್ಹ್ಮತ್ರುಪ್ತಿಯನ್ನ ನಮ್ಮ ಕೊಡುಗೆಯಲ್ಲಿ ಕಾಣೋಣ.
ಪ್ರೀತಿಯ ಮಿತ್ರರೆ....
ಒಮ್ಮೆ ತುಂಬು ಹ್ರುದಯದಿಂದ, ಯಾರಿಂದನು ಏನನ್ನೂ ಬಯಸದೆ, ಒಬ್ಬರಿಗೆ ಕಿಂಚಿತ್ತು ಸಹಾಯ ಮಾಡಿ ಅಲ್ಲಿ ನಮ್ಮ ನೆರಳಿನ ಗುರುತನ್ನೂ ಬಿಡದೆ ಬಂದು ನೋಡಿ, ನಿಜವಾದ ಆತ್ಹ್ಮತ್ರುಪ್ತಿ, ಸಂತೋಷನ ಅಂದು ನಾವು ಮೊದಲ ಬಾರಿಗೆ ನೋಡುತ್ತೇವೆ, ಸಂತೋಷನ ಯಾರೋ ಎಲ್ಲಿಂದನೂ ಕೊಂಡುಕೊಲ್ಲೋಕ್ಕಗಲ್ಲ ಅದು ನಮ್ಮಲ್ಲೇ ಇದೆ, ಅದನ್ನು ಗುರುತಿಸಿ, ಅನುಭವಿಸುವ ಕಡೆಗೆ ನಮ್ಮ ಚಿಂಥನೆಯನ್ನ ಬೆಳೆಸಿಕೊಳ್ಳೋಣ, ಅಂತ ಹಾದಿಯೆಡೆಗೆ ಕರೆದೊಯ್ಯುವ ಒಂದು ಸಾದನವೇ ಈ ನಿಸ್ವಾರ್ಥ ಧಾನ/ಕೊಡುಗೆ/ಸೇವೆ.
ಹೊಸ ವರುಷ ಬಂದಿದೆ, ಆದರೆ ಈ ವರುಷದ ನಮ್ಮ ದುಡಿಮೆಯ ಶೇ ೧ ಬಾಗವನ್ನು, ನಿಜವಾದ ಹೂಡಿಕೆಯಲ್ಲಿ ತೊಡಗಿಸೋಣ, ನಮ್ಮ ಉಳಿದ ಶೇ ೯೯ ರಿಂದ ಪಡೆಯಲು ಆಗದ ಸಂತೋಷ ನಮಗೆ ಈ ನಿಸ್ವಾರ್ಥದ ಕಿಂಚಿತ್ತು ಹೂಡಿಕೆಯಿಂದ ಸಿಗುತ್ತೆ ಅನ್ನೋ ಬರವಸೆಯನ್ನಂತು ನಾನು ಈ ವರ್ಷದ ಸಂದೇಷವಾಗಿ ನೀಡಬಲ್ಲೆ.
- ಶರ
--------------------------------------------------------------------------------------------------------------------------

30, 60 ಚಟಕ್ಕೆ ಬಿದ್ದೊನ್ನ ಹೆ೦ಗಾದ್ರು ಬಿಡಿಸ್ಬಹುದು, ಈ 30x40 ಚಟಕ್ಕೆ ಬಿದ್ದೊನ್ನ ಅವನ್ದೆ ಸೈಟಲ್ಲಿ ಮನ್ನಾಕಿ ಮುಚ್ಛೊ ತನಕ ಬಿಡ್ಸೊಕ್ಕಾಗಲ್ಲ - ಶರ