Saturday, August 9, 2008

ಬಾವನೆಯ ಬೆನ್ನೇರಿ

ಬಾವನೆಗಳ ಬೆಸೆಯುವುದಕೆ ಭಾಷೆ ಒಂದು ಸಾಧನ...
ಭಾಷೆಯ ಹಿರಿಮೆ ಅರಿತು ಬಾಳೆ, ಅದುವೇ ಸಾರ್ಥಕತೆಯ ಜೀವನ...

ಜೀವನ ಸಾರ ತಿಳಿದು ಹೇಳೊ ಕನ್ನಡದೊತ್ತಿಗೆಗಳ ಓಧುವ...
ಅದರ ತಿರುಳ ಅರಿತು ನಡೆದು ಬಾಳಿಗೊಂದು ಅರ್ಥ ನೀಡುವ...

ಜಾನಪದದ ಜಾಡಿನಲ್ಲಿ ಸಂಸ್ಕೃತಿಯ ತಿಳಿದು ನಡೆಯುವ...
ಹುಟ್ಟಿ ಬಂದ ಹಳ್ಳಿಗಳಿಗೆ ಸೇವೆಯ ಹಸ್ತ ಸದಾ ಚಾಚುವ...

ಇರುವ ತನಕ ನಾಡು ನುಡಿ ಸೇವೆಗಾಗಿ ಬಾಳುವ...
ಸತ್ತ ಮೇಲೂ ಸ್ವರ್ಗದಲ್ಲಿ ನಾಡಹಬ್ಬ ಮಾಡಿ ಮೆರೆಯುವ...

- ಶರ

ಓ ಸಾವೇ, ಬಾರದಿರು ನೀ ಪ್ರೀತಿಸಿ ಪೊರೆವ ಸಂಬಂದಗಳಲಿ,
ಬಾರದಿರು ನೀ ಜಗವ ಕಾಣದ ಹಸು ಕಂದಮ್ಮಗಳಲಿ,
ಕಾನದಿರು ನೀ ಪ್ರೀತಿಯ ಅರ್ಥ ತಿಳಿಸಿದ ಪ್ರೇಯಸಿಯಲಿ,
ಬಾರದಿರು ನೀ ದೇವರೆಂದು ತಿಳಿದ ತಂದೆ ತಾಯಿಯರಲ್ಲಿ,
ನೀ ಹುಟ್ಟಿ ಬಾ ಒಮ್ಮೆ ಇ ಪ್ರೀತಿ ತುಂಬಿದ ಜಗದಲ್ಲಿ,
ಆಗ ನಿನಗೂ ಅನಿಸುತ್ತದೆ.....ನನಗೂ ಸಾವು ಬಾರದಿರಲಿ.....ನನಗೂ ಸಾವು ಬಾರದಿರಲಿ.
- ಶರ

ಸದಾ ನಗುತಿರೆ , ಜನರೆನ್ನುವರು ನೀ ಹುಚ್ಚನೆಂದು...
ಒಮ್ಮೊಮ್ಮೆ ಅತ್ತರೂ ಹೇಳುವರು ಅಳುಬುರಕನೆಂದು...
ಅಳದೆಯೂ, ನಗದೆಯೂ ಇದ್ಧರೆ ಅನ್ನುವರು ನೀ ಗುಮ್ಮನೆಂದು... 
ಆವರು ನಕ್ಕಾಗ ನಕ್ಕು, ಅಳುವಾಗ ಅತ್ತು ಆವರಂತೆ ನಡೆದರೆ... 
ಒಪ್ಪುವರು ನೀ ಸರ್ವರೊಳಗುತ್ತಮನೆಂದು...
- ಶರ
ಸೋಲು , ಸೋಲು, ಸೋಲು
ಜೀವನದಲ್ಲಿ ಸೋಲು ಸಹಜ
ಸೋಲನ್ನರಿತು ಅದಮೆಟ್ಟಿ
ಗೆದ್ಧವನೆ ಚಲವಿರುವ ಮನುಜ

ಸೋತಾಗ ನಿನ್ನ ನೋಡಿ ನಗುವವರು ನಾಲ್ವರು
ಹಾಸ್ಯಮಾಡಿ ಹಿಂದೆ ನೂಕುವವರು ಮೂವರು
ನೀ ಯಾತಕು ಬಾರದವನೆನ್ನುವರು ಇರ್ವರು
ಆಧರೆ , ಎಲ್ಲ ಇರುವುದು ನಿನ್ನಲ್ಲೇ ಎನ್ನುವವನೋಬ್ಬನೆ , ಆ ದೇವರು

ಸೋಲಿನ ಕಾರಣ ಹೆಕ್ಕಿ ಹೇಳುವವರೇ ನಿಜವಾದ ಸ್ನೇಹಿತರು
ಅದನು ಮರೆಸಿ ಗೆಲುವ ದಾರಿ ತೊರುವರೆ ನಿನ್ನ ಬಾಂಧವರು
ಅದೆಲ್ಲಕ್ಕಿಂತ ಕರ್ಣಕುಂದಲದಂತೆ ನಿನ್ನಿಂದೆ ಇರುವರು ನಿನ್ನ ತಂದೆತಾಯಿಯರು
ಚಲಬಲದಿ ಗೆದ್ಧಾಗ , ನಕ್ಕವರು ನಿನ್ನ ಹಿಂದೆ ಹೌಹಾರಿ ಬರುವರು

ಸೋಲು , ಸೋಲು, ಸೋಲು
ಜೀವನದಲ್ಲಿ ಸೋಲು ಸಹಜ
ಸೋಲನ್ನರಿತು ಅದಮೆಟ್ಟಿ
ಗೆದ್ಧವನೆ ಚಲವಿರುವ ಮನುಜ
- ಶರ

No comments: